Friday, June 4, 2010

ಇದೆಂಥ ಮನೋದೌರ್ಬಲ್ಯ?

ಒಂದು ವಾರದ ಹಿಂದೆ ಅಮ್ಮನ ಜೊತೆ ಧಾರವಾಡದಿಂದ ರಾತ್ರಿ ೯ ಗಂಟೆಗೆ ಖಾಸಗಿ ಬಸ್ಸಿನಲ್ಲಿ ನನ್ನ ಪ್ರಯಾಣ ಸಾಗಿತ್ತು. ಹುಬ್ಬಳ್ಳಿಯಲ್ಲಿ ಅರ್ಧ ಗಂಟೆ ಬಸ್ ನಿಲ್ಲಿಸಿದ್ದರು. ಬಸ್ ನಿಲ್ದಾಣದ ಎದುರು, ಸಾಲು ಹಿಡಿದು ಸಾರಾಯಿ ಅಂಗಡಿಗಳು. ನನಗೇಕೋ ಬಸ್ ನಿಲ್ಲಿಸಿದ ಜಾಗ ಸರಿ ಅನ್ನಿಸಲಿಲ್ಲ, ಮುಜುಗರ ತರಿಸುತ್ತಿತ್ತು. ಅಲ್ಲಿ ನನ್ನ ಕಣ್ಣಿಗೆ ಬಿದ್ದ ಒಂದು ಸನ್ನಿವೇಶ ಮನಸ್ಸನ್ನು ಘಾಸಿಗೊಳಿಸಿತು.

ಸಾರಾಯಿ ಅಂಗಡಿಗಳಲ್ಲಿ ಒಳ ಹೋಗುವವರು ಹೊರಬರುವವರಲ್ಲಿ ಹದಿಹರೆಯದವರ ಸಂಖ್ಯೆಯೇ ಹೆಚ್ಚಿತ್ತು. ನಮ್ಮಬಸ್ ಹೊರಡಲು ಇನ್ನು ಕೆಲವೆ ಕ್ಷಣಗಳು ಬಾಕಿ ಉಳಿದಿದ್ದವು. ಅಷ್ಟು ಹೊತ್ತಿಗೆ ನಮ್ಮ  ಬಸ್ಸಿನವನೆ ಆದ ಒಬ್ಬ ಪ್ರಯಾಣಿಕ ಬಸ್ ನಿಂದ ಇಳಿದು ಆ ಅಂಗಡಿಯತ್ತ ನಡೆದ. ಹಿಂದಿನಿಂದ ಅವನ ಸಂಬಂಧಿ ಅವನನ್ನು ಕೂಗಿ ಕೂಗಿ ಕರೆದಳು. 'ಹೋಗ್ಬೇಡೋ ತಮ್ಮಾ, ಬಸ್ ಬಿಡ್ತೈತಿ' ಎಂದು. ಆದರೆ ಆ ಮನುಷ್ಯ ಅವಳ ಕೂಗನ್ನು ಕಿವಿಗೆ ಹಾಕಿಕೊಳ್ಳದೆ ಹೊಗಿಯೇಬಿಟ್ಟ.

ಕೆಲ ಕ್ಷಣಗಳಲ್ಲಿ ಬಸ್ ಕಂಡಕ್ಟರ್ 'ಎಲ್ಲಾರೂ ಅದೀರಲ್ಲಾ, ಎರಡ್ ನಿಮ್ಷದೊಳ್ಗ್ ಬಸ್ ಬಿಡ್ತೀವಿ' ಎಂದ. ತಕ್ಷಣ ಬಸ್ಸಿನಲ್ಲಿದ್ದ ಆತನ ಸಂಬಂಧಿ ಕೆಳಗಿಳಿದು ಅವನ ಹಿಂದೆಯೇ ಓಡಿದಳು. ಅವನನ್ನು ಕರೆಯಬೇಕಲ್ಲ... ಒಬ್ಬ ಸುಸಂಸ್ಕೃತ ಹೆಣ್ಣಾಗಿ ಆ
ಸಾರಾಯಿ ಅಂಗಡಿಯೊಳಗೆ ಹೋಗಲು ಹೇಗೆ ಸಾಧ್ಯ? ಹೊರಗಿನಿಂದಲೇ 'ಲೋ ತಮ್ಮಾ...' ಎಂದು ಕೂಗಿದಳು. ಉತ್ತರ ಬರಲಿಲ್ಲ. 'ಮಹಾಂತೇಶಾ...' ಎಂದು ಮತ್ತೆ ಮತ್ತೆ ಕೂಗಿದಳು. ಕೇಳಬೇಕಲ್ಲ ಆ ಮಹಾಪುರುಷನಿಗೆ. ಅಷ್ಟು ಸಾಲದೆಂದು ಆ ಅಂಗಡಿಯಲ್ಲಿದ್ದ ಆ ಜನ (ಕುಡುಕರು) ಅವಳಿಗೆ ಸಹಾಯ ಮಾಡುವುದನ್ನು ಬಿಟ್ಟು ಅವಳ ಆ ಸ್ಥಿತಿಯನ್ನು ನೋಡಿ ನಗಲಾರಂಭಿಸಿದರು! ಅಷ್ಟರಲ್ಲಿ ಬಸ್ ಕಂಡಕ್ಟರ್ ಆ ಹೆಂಗಸನ್ನು ಬೊಟ್ಟು ಮಾಡಿ 'ನೀವ್ ಬರ್ತಿರೋ ಏನ್ ಬಸ್ ಬಿಡ್ಲೋ' ಎಂದು ಕೇಳಿದ್ದಕ್ಕೆ ಆಕೆ ಬೇರೆ ದಾರಿ ಕಾಣದೆ ಸುಮ್ಮನೆ ಬಸ್ ಹತ್ತಿದಳು. ಪ್ರಯಾಣ ಸಾಗಿತು. ಅದುವರೆಗೂ ಬಸ್ಸಿನ ಕಿಟಕಿಯಿಂದ ಅಸಹಾಯಕಳಾಗಿ ಇವನ್ನೆಲ್ಲ ನೋಡುತ್ತಿದ್ದ ಅವನ ಹೆಂಡತಿಯ ಮನದ ಬೇಗುದಿ ಬಿಕ್ಕಳಿಕೆಯಾಗಿ ಬದಲಾಗಿತ್ತು.
















ಅವಳ ಕಣ್ಣೀರನ್ನು ಒರೆಸುವವನೇ ಅವಳ ಆ ಕಣ್ಣೀರಿಗೆ ಕಾರಣನಾದಾಗ? ಬಸ್ ಸೀಟ್ ರಿಸರ್ವ್ ಮಾಡಿಸಿದ್ದನ್ನೂತಪ್ಪಿಸಿಕೊಳ್ಳುವಷ್ಟರ ಮಟ್ಟಿಗೆ ಮೀರಿ ನಿಂತಿತ್ತು ಅವನಲ್ಲಿ ಚಟ. ದುಶ್ಚಟ ಒಬ್ಬ ವ್ಯಕ್ತಿಯನ್ನು ಎಷ್ಟರ ಮಟ್ಟಿಗೆ ಕೆಳಗಿಳಿಸಬಹುದು? ತಮ್ಮಮನೋದೌರ್ಬಲ್ಯದಿಂದ ಸುತ್ತಲಿನ ಸಂಬಂಧಿಗಳ ಕನಸುಗಳು ಕರಗಿ ಹೋಗುತ್ತಿರುವುದೂ ಅವರರಿವಿಗೆ ಬಾರದು, ಅಂತಹ ಸ್ವಾರ್ಥಿಗಳು.

ನಮ್ಮ ಸಂಸ್ಕೃತಿಯ ತೇರನ್ನೆಳೆವ ಈ ಸಮಾಜವೇ ಎಷ್ಟೊಂದು ರೋಗಪೀಡಿತ! ಮನಸ್ಸಿನ ದೌರ್ಬಲ್ಯ ಸದೃಢವಾದ ಸಮಾಜವನ್ನು ಹಂತ ಹಂತವಾಗಿ ಸಮಾಧಿಗೊಳಿಸುತ್ತಿದೆ ಎನ್ನಿಸಿತು. ಎಷ್ಟೋ ಅಸಾಮಾನ್ಯ ಪ್ರತಿಭೆಗಳು ಇಂತಹ ಕೀಳು ಮನೋಪ್ರವ್ರತ್ತಿಯಿಂದ ವ್ಯರ್ಥ ಪೋಲಾಗುತ್ತಿವೆ. ನಿಜವಾದ ಬಡತನವೆಂದರೆ ಇದೆ ಏನೋ!

_________________________________________________
                     was published in vijaya karntaka on 27/05/2010

4 comments:

  1. Every youth must be aware with all health killing activities.......... u hav given a wonderful article. Today we can see that many students hav been adicted for such activities. atleast from now let us join our hands together for protecting youths from all such activities........

    ReplyDelete
  2. visit my blog
    gsystime.blogspot.com

    Spritual and general information

    Regards,
    Nagaraju G
    Narayana B shet

    ReplyDelete